Tuesday, August 16, 2016

ಸವಿಯಾದ ಕವಿಯಾಗಿ ಕವಿತೆಯ ಬರೆದಾಗ ಬಂದ ಹಾಡು




ಮುಂಗಾರು ಮಳೆ ೨ ಚಿತ್ರದ "ಸರಿಯಾಗಿ ನೆನಪಿದೆ ನನಗೆ" ಹಾಡಿನ ರಾಗದಲ್ಲಿ... 


ಕವಿಯಾದೆ ನಿನ್ನನು ನೋಡಿ 
ಸ್ವರವೆಲ್ಲ ನೀನೆ ನನ ಕಾಡಿ 
ಪುಟದ ಮೇಲೆ ಚೆಲ್ಲುತಿರುವ 
ಪದದ ಜೀವಾಳ 
ಸ್ವರಗಳ ಪೋಣಿಸಿ... ನರದಲಿ ಜೋಡಿಸಿ 
ಹಾಡು ಮೂಡುತಿದೆ.. ಬಾರೆ ಸನಿಹ 

ಕವಿಯಾದೆ ನಿನ್ನನು ನೋಡಿ 
ಸ್ವರವೆಲ್ಲ ನೀನೆ ನನ ಕಾಡಿ 

ವರ್ಣಮಾಲೆಯು ನಂಗೆ ಸಾಲದು 
ನಿನ್ನ  ಚಂದವ ಪದದಿ ಹೇಳಲು 
ರವಿಯು ಕಾಣದ ಮಾಯಾಲೋಕದ 
ರಾಜ್ಯಭಾರಕೆ ರಾಣಿ ನೀನೇನಾ 
ಕವಿಯಾದೆ ನಾನೀಗ ನಿನ ನೋಡಲು 
ಸವಿಯಾದ ನಿನ ಸ್ಪರ್ಶವ ಸೋಕಲು 
ಕಾರಣ ಇಲ್ಲದೆ... ಕವಿತೆಯು ಹುಟ್ಟಿದೆ 
ಹೆಸರಿಡುತಿರುವೆ ಏನಿರಬಹುದು? 

ಕವಿಯಾದೆ ನಿನ್ನನು ನೋಡಿ 
ಸ್ವರವೆಲ್ಲ ನೀನೆ ನನ ಕಾಡಿ 

ನಿನ್ನ ಬಣ್ಣದ ಉಪಮೇಯಕೆ 
ಉಪಮಾನವ ಎಲ್ಲಿ ಹುಡುಕಲಿ
ಸೊಗಸಾಗಿರೋ ನಿನ್ನ ರೂಪಕೆ 
ಛಂದಸ್ಸಾದರು ಸೋಲಬೇಕಿದೆ 
ವ್ಯಾಕರಣಕೆ ಏನೇನು ಗೊತ್ತಿಲ್ಲ 
ನಿನ್ನ ಬಣ್ಣಿಸೋ ಪದಗಳೇ ಸಿಗ್ತಿಲ್ಲ 
ಹರಿಹರ ರಾಘವ.. ರನ್ನರು ಪಂಪರು 
ನೋಡಿರದ ಚೆಲುವು ನೀನಾ ಚೆಲುವೆ?

ಕವಿಯಾದೆ ನಿನ್ನನು ನೋಡಿ 
ಸ್ವರವೆಲ್ಲ ನೀನೆ ನನ ಕಾಡಿ